ಇದು ಹೃದಯದಲ್ಲಿ ದೇವರು
ಬರೆದಿರುವ ಒಲವಿನ ಅಕ್ಷರ,
ಇದರಿಂದಲೇ ಆಗುವುದು
ಬದುಕಿನ ಸಾಕ್ಷಾತ್ಕಾರ!
ನಮ್ಮಿಂದ ಬಯಸಿದವರಿಗೆ ನೀಡಿದರೆ
ಮಾತ್ರ ಅದಕ್ಕೊಂದು ಬೆಲೆ,
ಇಲ್ಲವಾದಲ್ಲಿ ಆಗಬಹುದು
ಪ್ರೀತಿಯ ಕೊಲೆ!
ಇಷ್ಟ ಅಂತ ಹೇಳಿದರೂ ಯಾರೂ
ತೋರಿಸಲ್ಲ ಪ್ರೀತಿ,
ಯಾಕೆ ಮಾಡುತಿದ್ದಾರೆ ಜಗದ
ಜನರು ಈ ರೀತಿ?
ಬಿಸಿಲ ಬೇಗೆಗೆ ಬರಿದಾದ ಭೂಮಿಯು
ಒಂದು ಹನಿ ಮಳೆ ಹನಿಗೆ ಕಾದಂತೆ,
ನೋವು ತುಂಬಿದ ಮನವು ಕೂಡ
ಒಂದು ಹನಿ ಪ್ರೀತಿನೇ ಬಯಸುತಿದೆ
ನೊಂದ ಹೃದಯಕೆ ಮಾತ್ರ
ಗೊತ್ತಿದೆ ಪ್ರೀತಿಯ ಬೆಲೆ
ಅದಕ್ಕಾಗಿ ಯಾರನ್ನು ಕೂಡ
ನೋಯಿಸಬೇಡಿ ಇನ್ನು ಮೇಲೆ
ದೂರ ಮಾಡಬೇಡಿ ಎಂದೂ
ತುಂಬಾ ಪ್ರೀತಿಸುವ ಹೃದಯಗಳನ್ನು
ಏಕೆಂದರೆ ಅದರ ಹಿಂದಿರುವ ಮನಸು
ಹುಚ್ಚಾಗಿ ಪ್ರೀತಿಸುತಿದೆ ನಿಮ್ಮನು
- ಸ್ವರು
No comments:
Post a Comment